ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಣ್ಣಾ ಅವಸರವೇನಿತ್ತು?

ಇಮೇಜ್
ಎಪ್ಪತ್ತೇಳು. ಸಾಧನೆಗಳು ತಂದುಕೊಟ್ಟ ಸಂತಸ, ನೆಮ್ಮದಿಯಿಂದಿದ್ದ ಕೌಟುಂಬಿಕ ಜೀವನ, ಬೇರೆಯವರ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸುವ ಮಗು ಮನಸ್ಸು, ಊಟದಲ್ಲಿದ್ದ ಅಚ್ಚುಕಟ್ಟುತನ, ಯೋಗ-ವ್ಯಾಯಾಮದಲ್ಲಿ ಹದಗೊಂಡಿದ್ದ ಆರೋಗ್ಯವಂತ ದೇಹ ಮತ್ತು ಬದುಕಿನಲ್ಲಿ ರೂಢಿಸಿಕೊಂಡಿದ್ದ ಶಿಸ್ತಿನೆದುರು ಎಪ್ಪತ್ತೇಳು ಎನ್ನುವುದು ಮಹಾ ದೊಡ್ಡ ವಯಸ್ಸೇನಲ್ಲ. ಎಂತೆಂತಹವರೋ ನೂರು ತಲುಪುತ್ತಾರೆ. ಅವಶ್ಯಕತೆಯಿಲ್ಲದವರೂ ಸರಾಗವಾಗಿ ನೂರರ ತನಕ ನಡೆದು ಬಿಡುತ್ತಾರೆ. ಅಂತಹದ್ದರಲ್ಲಿ ಬರೀ ಎಪ್ಪತ್ತೇಳನೇ ವಯಸ್ಸಿನಲ್ಲೇ ನಮ್ಮೆಲ್ಲರ ಪ್ರೀತಿಯ ಅಣ್ಣಾ ಯಾಕೆ ಅವಸರಿಸಿಬಿಟ್ಟರು? ನಾವೆಲ್ಲರೂ ಮತ್ತು ನಮ್ಮೆಲ್ಲರ ಪ್ರೀತಿ ಅವರಿಗೆ ಇಷ್ಟೊಂದು ಬೇಗ ಬೇಡವಾಗಿಬಿಟ್ಟಿತಾ? ರಾಜ್‌ಕುಮಾರ್ ಅಗಲಿಕೆಯ ಸುದ್ದಿ ನನ್ನ ಕಿವಿಗೆ ಬೀಳುತ್ತಿದ್ದಂತೆ ನಾನು ಮೊದಲು ಕೇಳಿಕೊಂಡಿದ್ದೇ ಈ ಪ್ರಶ್ನೆಯನ್ನು. ಇವತ್ತಿಗಷ್ಟೇ ಅಲ್ಲದೇ ನಾಳೆ, ನಾಡಿದ್ದು, ಅದರಾಚೆಯೂ ನಾನು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ಇರುತ್ತೇನೆ. ಯಾಕೆಂದರೆ ಅಣ್ಣಾ ಮಾಡಿದ ಅವಸರ ನನ್ನಲ್ಲೊಂದು ಅನಾಥ ಭಾವವನ್ನು ತುಂಬಿ ಹೋಗಿದೆ, ಭಯವನ್ನು ಹುಟ್ಟು ಹಾಕಿದೆ, ಮುಂದೇನು ಎಂಬ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದಲೇ ನಾನು ಪ್ರತಿಕ್ಷಣವೂ ಅಣ್ಣನ ನೆನಪಾದಾಗಲೆಲ್ಲಾ ’ಅಣ್ಣಾ ಅವಸರವೇನಿತ್ತು?’ ಎಂದು ಕೇಳುತ್ತಲೇ ಇದ್ದೇನೆ. ರಾಜ್‌ಕುಮಾರ್ ಕೇವಲ ಒಬ್ಬ ನಟರಾಗಿದ್ದಿದ್ದರೆ ನನ್ನೊಂದಿಗೆ ಆರು ಕೋಟಿ ಕನ್ನಡಿಗರನ್ನು ಈ ಭಯ, ಆ

ತಂದೆಯೊಂದಿಗೆ ಸಮಯ ಕಳೆಯಬೇಕೆಂದೇ ಆ ನಟ ಸಿನಿಮಾಗಳಿಂದ ನಾಲ್ಕು ವರ್ಷ ದೂರವಾದರು!

ಇಮೇಜ್
ಸುನೀಲ್ ಶೆಟ್ಟಿ ನಟನಾಗಿ ಇಷ್ಟವಾಗದೇ ಹೋದರೂ, ಮನುಷ್ಯನಾಗಿ ಇವತ್ತು ತುಂಬಾ ಇಷ್ಟವಾದರು. ಹೌದು, ಇತ್ತೀಚೆಗೆ ಸುನೀಲ್ ಶೆಟ್ಟಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಬಹುಶಃ ಬಾಲಿವುಡ್ಡಿನಿಂದ ನಿವೃತ್ತಿ ತೆಗೆದುಕೊಂಡರೇನೋ ಎಂದುಕೊಳ್ಳುವಾಗಲೇ ’ಸೂಪರ್‌ ಡ್ಯಾನ್ಸರ್‌ ಸೀಸನ್ 3’ ರಿಯಾಲಿಟಿ ಶೋ ಎಪಿಸೋಡಿಗೆ ಮೊನ್ನೆ ಅತಿಥಿಯಾಗಿ ಬಂದಿದ್ದ ಸುನೀಲ್ ಶೆಟ್ಟಿ, ತಾನೇಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದ ಕಾರಣ ಕೇಳಿ ಅವರು ಬಾಲಿವುಡ್ಡಿನ ಹೀರೋ ಎನ್ನುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಬದುಕಿನ ನಿಜವಾದ ಹೀರೋ ಅನ್ನಿಸಿಬಿಟ್ಟರು. ಅವರ ತಂದೆ ವೀರಪ್ಪಶೆಟ್ಟಿ ಎರಡು ವರ್ಷಗಳ ಹಿಂದೆ ತೀರಿಕೊಂಡರಂತೆ. ಅದಕ್ಕೂ ಮೊದಲು ಅವರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರೆ, ಸಿನಿಮಾ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದ ಸುನೀಲ್ ಶೆಟ್ಟಿಗೆ, ತಂದೆ ಈ ಸ್ಥಿತಿಯಲ್ಲಿರುವಾಗ ತಾನು ಯಾಕೆ ಕೆಲಸ ಮಾಡುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಅನ್ನಿಸಿದ್ದೇ ಇರುವ ಕೆಲಸವನ್ನೆಲ್ಲ ಮುಗಿಸಿ ಚಿತ್ರರಂಗದಿಂದ ಸಂಪೂರ್ಣವಾಗಿ ಬ್ರೇಕ್ ತೆಗೆದುಕೊಂಡವರು ತಂದೆಯೊಂದಿಗೇ ಪೂರ್ತಿ ಸಮಯ ಇರಲಾರಂಭಿಸಿದರಂತೆ! ’ನನ್ನ ಬದುಕಿನಲ್ಲಿ ನಾನು ತಂದೆಯೊಂದಿಗೆ ಕಳೆದ ಇದೊಂದು ನಾಲ್ಕು ವರ್ಷ ತುಂಬಾ ಅಮೂಲ್ಯವಾದದ್ದು’ ಎಂದು ಅವರು ಭಾವುಕರಾಗಿ ಹೇಳಿದ ರೀತಿ ಈ ಸಮಾಜದ ಪಾಲಿಗೆ ಅತಿದೊಡ್ಡ ಸಂದೇಶದಂತೆ ಕಾಣುತ್ತಿದೆ. ಇವನು ನನ್ನ ನೆಚ್ಚಿನ ಹೀರೋ ಎಂದು ಕಟೌಟ್

ಸವಸುದ್ದಿಯಿಂದ ಎಲ್.ಈ.ಕೊಳವಿ ಸರ್‌ ಬರೆದ ಪತ್ರದೊಂದಿಗೆ...

ಇಮೇಜ್
ನನಗೆ ನೆನಪಿರುವಂತೆ ಒಂದನೇ ತರಗತಿಯಿಂದ ಎಂ.ಎ ಮಾಡುವ ತನಕ ಯಾವತ್ತೂ ನಾನು ನನ್ನ ಟೀಚರ‍್ರುಗಳಿಗೆ ತೀರಾ ನೆಚ್ಚಿನ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಹೋಂವರ್ಕ್ ಮಾಡಿಕೊಂಡು ಹೋಗಿ ಶಹಬ್ಬಾಷ್‌ಗಿರಿ ಗಿಟ್ಟಿಸಿಕೊಂಡಿದ್ದು, ಕ್ಲಾಸಿನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದು, ಏನಾದರೂ ಕೆಲಸ ಹೇಳಿದ ತಕ್ಷಣ ಓಡಿ ಹೋಗಿ ಮುಂದೆ ನಿಲ್ಲುವುದು, ಟೀಚರ‍್ರುಗಳೆದುರು ಅತಿ ವಿನಯದಿಂದ ನಡೆದುಕೊಳ್ಳುವುದು... ಉಹ್ಞೂಂ, ಇವ್ಯಾವುದೂ ನನ್ನ ವಿದ್ಯಾರ್ಥಿ ಜೀವನದಲ್ಲಿರಲಿಲ್ಲ. ಕ್ಲಾಸಿನಲ್ಲಿದ್ದಷ್ಟು ಹೊತ್ತು ಪಾಠ ಕೇಳುತ್ತಿದ್ದೆ ಎನ್ನುವುದು ಬಿಟ್ಟರೆ ತೀರಾ ಪುಸ್ತಕದ ಹುಳುವಾಗಿದ್ದವನೂ ನಾನಲ್ಲ. ಪರೀಕ್ಷೆಗೆ ಕೆಲವೇ ಕೆಲವು ದಿನಗಳಿವೆ ಎನ್ನುವಾಗ ಓದಿಕೊಂಡು, ಇದ್ದಿದ್ದರಲ್ಲಿ ಒಂದಿಷ್ಟು ಒಳ್ಳೆಯ ಸ್ಕೋರಿನೊಂದಿಗೇ ಪಾಸಾಗುತ್ತಿದ್ದೆನಾದ್ದರಿಂದ ’ಕೆ.ಗಣೇಶ’ ಎಂದರೆ ಯಾರೆಂದು ಟೀಚರ‍್ರುಗಳಿಗೆ ಗೊತ್ತಿರುತ್ತಿತ್ತು. ಹಾಗೆ ನೋಡಿದರೆ, ಪ್ರೈಮರಿ ಸ್ಕೂಲಿನಲ್ಲಿದ್ದಾಗ ಬಸವಂತಪ್ಪ ಮೇಷ್ಟ್ರಿಗೇ ನಾನು ಸ್ವಲ್ಪ ಫೇವರಿಟ್ ಆಗಿದ್ದೆ ಅನ್ನಿಸುತ್ತದೆ. ಅವರು ಆಗ ಕ್ಲಾಸಿನ ಮಧ್ಯೆ ಕರೆದು ಸ್ಕೂಲಿಗೆ ಸಂಬಂಧಿಸಿದಂತೆ ಇದ್ದಿರಬಹುದಾದ ಹಣ ಕಟ್ಟುವುದು, ಪಾಸ್ ಬುಕ್ ಎಂಟ್ರಿ ಎಂದು ನನ್ನನ್ನು ಕೋಡೂರಿನಲ್ಲಿದ್ದ ಕೆನರಾ ಬ್ಯಾಂಕಿಗೆ ಕಳಿಸುತ್ತಿದ್ದರು, ಟೀ-ಕಾಫಿ ತರಲು ಪ್ಲಾಸ್ಕ್ ಕೊಟ್ಟು ನನ್ನ ಕ್ಲಾಸ್‌ಮೇಟ್ ಅನಿತಾಳ ತಂದೆಯ ಹೋಟೆಲ್ಲಿಗೆ ಕಳಿಸುತ್ತಿದ್ದರು... ಬೇರ

ಧಾರವಾಡಿಗರನ್ನೇ ಒಳಗೊಳ್ಳದೇ ದುಃಸ್ವಪ್ನವಾಯಿತೇ ಸಾಹಿತ್ಯ ಸಮ್ಮೇಳನ?!

ಇಮೇಜ್
‘ಉತ್ತರ ಕರ್ನಾಟಕದ ಮಂದಿ ಮಾತು ಒರಟಿರಬಹುದಾದರೂ, ಮನಸ್ಸು ಮಾತ್ರ ಮೃದು’ ಎನ್ನುವ ಮಾತು ನನ್ನದೇ ಅನುಭವದಲ್ಲಿ ಇಷ್ಟು ದಿನ ಸತ್ಯವೆನ್ನಿಸಿತ್ತಾದರೂ, ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಾಲ್ಕು ದಿನದ ಅನುಭವ ಈ ಮಾತನ್ನು ಸುಳ್ಳಾಗಿಸಿಬಿಟ್ಟಿತು. ಯಾಕೆಂದರೆ ಧಾರವಾಡದಲ್ಲಿದ್ದ ನಾಲ್ಕು ದಿನವೂ ಧಾರವಾಡಿಗರು ಪರವೂರಿನಿಂದ ಬಂದ ನನ್ನಂತಹವರನ್ನು ಹೆಜ್ಜೆ ಹೆಜ್ಜೆಗೂ ಸುಲಿಯುತ್ತಿದ್ದಿದ್ದು ನೋಡಿದರೆ, ಕಾಲವೇ ಬದಲಾಗಿದೆಯಾ ಅಥವಾ ಉತ್ತರ ಕರ್ನಾಟಕದ ಮಂದಿಯ ಮನಸ್ಸೆಂದರೆ ಮೃದು, ನಿಷ್ಕಲ್ಮಶ ಪ್ರೀತಿ ತೋರಿಸುವಂತಹದ್ದು ಎನ್ನುವುದೇ ತಿರುವುಮುರುವಾಗಿದೆಯಾ ಅನ್ನಿಸಿಬಿಟ್ಟಿತು. ಕಳೆದ ಏಳೆಂಟು ವರ್ಷಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಾಶಕನಾಗಿ ಪುಸ್ತಕ ಮಳಿಗೆಗಳನ್ನು ಹಾಕುತ್ತಿರುವ ನಾನು, ನನ್ನ ಅನುಭವದಲ್ಲಿ ಇಷ್ಟು ಕೆಟ್ಟ ಮತ್ತು ಉಸಿರುಗಟ್ಟಿಸುವಂತಹ ಸಾಹಿತ್ಯ ಸಮ್ಮೇಳನವನ್ನು ನೋಡಿಯೇ ಇರಲಿಲ್ಲ. ಅಷ್ಟರಮಟ್ಟಿಗೆ ಧಾರವಾಡದ ಸಾಹಿತ್ಯ ಸಮ್ಮೇಳನ ನಾ ಕಂಡ ಸಮ್ಮೇಳನಗಳಲ್ಲೇ ಅತಿ ಕೆಟ್ಟ ಸಮ್ಮೇಳನವಾಗಿ ನನ್ನ ಮನದಲ್ಲುಳಿಯಿತು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಈ ಸಮ್ಮೇಳನಕ್ಕೆ ಧಾರವಾಡದ ನಗರ ಭಾಗದಿಂದ ಅಜಮಾಸು ಆರು ಕಿಲೋಮೀಟರ್ ದೂರವಿತ್ತು. ಈ ದೂರವನ್ನು ಹತ್ತಿರವಾಗಿಸುವ ಸಹೃದಯತೆ ಧಾರವಾಡಿಗರದ್ದಾಗಿದ್ದರೆ, ಬಹುಶಃ ಪರವೂರಿನಿಂದ ಸಮ್ಮೇಳನದ ಸಂಭ್ರಮದ ಒಂ

ಇಲ್ಲಿ ಕುಳಿತು ಯುದ್ಧದ ಮಾತನಾಡುವ ಬದಲು,ನಾವೇ ಯುದ್ಧಭೂಮಿಗೆ ಹೋಗೋಣ...

ಹೀಗೆ ಮಾಡಬಹುದಾ? ಒಮ್ಮೆ ಗಂಭೀರವಾಗಿ ಯೋಚಿಸೋಣ. ಉಗ್ರರ ದಾಳಿಯಿಂದ ನಮ್ಮ ನಲ್ವತ್ತಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದ್ದೇವೆ. ಈ ಹೊತ್ತಿನಲ್ಲಿ ನಮ್ಮೆಲ್ಲರ ಎದೆಯೊಳಗೆ ಪ್ರತೀಕಾರದ ಕಿಡಿಯೊಂದು ಹೊತ್ತಿ ಉರಿಯುತ್ತಿದೆ. ನೆರೆಯ ಶತ್ರು ದೇಶಕ್ಕೆ ತಕ್ಕ ಪಾಠ ಕಲಿಸಲೇಬೇಕೆಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ. ಮುಂದಿನ ನಡೆ ಬಗ್ಗೆ ಸೇನೆಗೆ ಸಂಪೂರ್ಣ ಸ್ವಾತಂತ್ರ‍್ಯ ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರವೂ ಹೇಳಿದೆ. ಯುದ್ಧವಾಗಬೇಕು ಮತ್ತು ಒಮ್ಮೆ ನೆರೆಯ ಶತ್ರು ದೇಶ ಮತ್ತು ಆ ದೇಶ ಸಾಕುತ್ತಿರುವ ಉಗ್ರಗಾಮಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟು ’ನಾವೇನೆಂದು ತೋರಿಸಬೇಕು’ ಎನ್ನುವ ಹುಮ್ಮಸ್ಸೂ ನಮ್ಮೆಲ್ಲರಲ್ಲೂ ಪುಟಿಯುತ್ತಿದೆ. ಈ ಪ್ರತೀಕಾರಕ್ಕೆ ನಮ್ಮ ಸೈನಿಕರು ಮಾತ್ರವೇ ಯಾಕೆ ಮುನ್ನುಗ್ಗಿ ಹೋಗಬೇಕು. ನಾವೂ ಹೋಗೋಣವಾ? ಇದಕ್ಕೆ ನಮ್ಮ ದೇಶ ಮತ್ತು ಸರ್ಕಾರ ಅನುಮತಿ ಕೊಡುತ್ತದೆಯೋ ಇಲ್ಲವೋ ಬೇರೆ ಮಾತು. ಆದರೂ ನಮ್ಮ ಸೈನಿಕರು ಮಾಡುವ ಕೆಲಸವನ್ನು ಇಲ್ಲಿ ಬೆಚ್ಚಗೆ ಕುಳಿತುಕೊಂಡ ನಾವೂ ಮಾಡೋಣ ಅಥವಾ ಅವರ ಜೊತೆಗೆ ಯುದ್ಧ ಭೂಮಿಯಲ್ಲಿ ನಿಲ್ಲೋಣ. ಅದಕ್ಕಾಗಿ ಈಗ ಯುದ್ಧ ಮಾಡಲೇಬೇಕೆಂದು ಒತ್ತಾಯಿಸುತ್ತಿರುವ ಈ ದೇಶದ ಪ್ರಜೆಗಳಾದ ನಾವೆಲ್ಲರೂ ಪ್ರಧಾನಿ ಮೋದಿಯವರಿಗೆ, ರಕ್ಷಣಾ ಸಚಿವಾಲಯಕ್ಕೆ ’ಇನ್ನು ನಾವು ಸುಮ್ಮನಿರುವುದು ಬೇಡ, ನಮ್ಮ ಸಹೋದರ ಸೈನಿಕರನ್ನು ಬಲಿ ಪಡೆದುಕೊಂಡ ಉಗ್ರಗಾಮಿಗಳಿಗೆ ಬುದ್ಧಿ ಕಲಿಸಿಯೇ ಬಿಡೋಣ. ಇದಕ್ಕಾಗಿ ಈ ದೇ