ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಇಮೇಜ್
ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ ನಿನ್ನನ್ನು ನಂಬಿಕೊಂಡವರಿಗೆ, ಪ್ರೀತಿಸಿಕೊಳ್ಳುತ್ತಿರುವವರಿಗೆ ಕಷ್ಟವಾಗುವುದಿಲ್ಲವಾ, ನೀನಿಲ್ಲದೇ ಅವರು ಹೇಗೆ ಬದುಕುತ್ತಾರೆ ಎನ್ನುವ ಯಾವ ಪ್ರಶ್ನೆಗಳನ್ನೂ ಸಾವು ಕೇಳುವುದಿಲ್ಲ. ಅದು ನಿನ್ನ ಕಣ್ಣೀರು, ಇದೊಂದು ಸಾರಿ ಬಿಟ್ಟು ಬಿಡು ಎಂದು ದಯನೀಯವಾಗಿ ಮುಗಿದ ಕೈ... ಯಾವುದನ್ನೂ ನೋಡುವುದಿಲ್ಲ. ಬರಬೇಕೆಂದರೆ ನೀನು ಬರಬೇಕಷ್ಟೇ ಎಂದು ಎಳೆದುಕೊಂಡು ಹೋಗಿ ಬಿಡುತ್ತದೆ. ಹಾಗಿಲ್ಲದೇ ಹೋಗಿದ್ದರೆ ಖುಷ್ಕುಷಿಯಾಗಿ ಜಲಪಾತದೆದುರು ನಿಂತುಕೊಂಡು ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ ಅದ್ಯಾಕೆ ಹಾಗೆ ಬಿದ್ದು ಸಾವಿನೊಂದಿಗೆ ಹೋಗಿ ಬಿಡುತ್ತಿದ್ದ ಹೇಳಿ?! ಆತ ಸಾಯುವುದಕ್ಕೆಂದು ಅಲ್ಲಿ ಹೋಗಿರಲಿಲ್ಲ. ಒಂದೊಮ್ಮೆ ಹಾಗೆ ಹೋಗಿದ್ದರೂ ಆತ ಇಷ್ಟು ಚೆಂದದ ವಿಡಿಯೋ ಮಾಡಿಸಿಕೊಳ್ಳುತ್ತಿರಲಿಲ್ಲ. ಬದುಕಬೇಕು, ಬದುಕಿಗೆ ಇನ್ನಷ್ಟು ಬಣ್ಣ ತುಂಬಿಕೊಳ್ಳಬೇಕು ಎನ್ನುವ ಕನಸುಗಳೊಂದಿಗೇ ಭದ್ರಾವತಿಯ ಶರತ್‌ ಜಲಪಾತದೆದುರು ಇರುವ ಬಂಡೆಗಲ್ಲಿನ ಮೇಲೆ ನಿಂತಿದ್ದಾನೆ. ಹೀಗೆ ನಿಂತವನೆದುರಿಗೇ ’ಸಾವು’ ತನ್ನ ಅಪ್ಪುಗೆಗೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು ಎಂದು ಶರತ್‌ಗಾಗಲೀ, ಶರತ್‌ ವಿಡಿಯೋ ಮಾಡುತ್ತಿದ್ದ ಜೊತೆಗಿದ್ದ ಸ್ನೇಹಿತನಿಗಾಗಲೀ ಕಾಣಿಸಿರಲಿಲ್ಲ... ಕಾಣಿಸುವುದು ಸಾಧ್ಯವೂ ಇಲ್ಲ.

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಇಮೇಜ್
ಕೆಲವರನ್ನು ಗಮನಿಸಿ ನೋಡಿ. ಅವರ ಒಂಟಿತನ ಎನ್ನುವುದು ಜವಾಬ್ದಾರಿಗಳಿಂದ ದೂರ ಉಳಿಯಲಿಕ್ಕೆಂದು ಅವರೇ ಸೃಷ್ಟಿಸಿಕೊಂಡ ಒಂದು ಗುರಾಣಿಯಂತೆ ಕಾಣಿಸುತ್ತಿರುತ್ತದೆ! ಅವರ ಬದುಕು ಅವರ ಇಷ್ಟ ಎನ್ನುವುದೇನೋ ಸರಿ. ಹಾಗೆಂದು ನೀನು ನಿಭಾಯಿಸಲೇಬೇಕಾದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಾಗ ಮಾತ್ರ ನಿನ್ನಲ್ಲಿ ’ಒಂಟಿತನ’ದ ಬದುಕು ಎಚ್ಚರಗೊಳ್ಳುವುದೇಕೆ? ನನಗೆ ಯಾರೂ ಬೇಡ, ನಾನು ನನ್ನಷ್ಟಕ್ಕೆ ಬದುಕುತ್ತಿದ್ದೇನೆ ಎನ್ನುವಂತಹ ಮಾತುಗಳು ಯಾರೋ ನಿನ್ನ ಬಳಿ ಕಷ್ಟ ಹೇಳಿಕೊಂಡು ಬಂದಾಗ ಮಾತ್ರ ನೆನಪಾಗುವುದೇಕೆ?! ಅಂದರೆ ಸುಖ ಇದೆ, ನೆಮ್ಮದಿ ಇದೆ ಎನ್ನುವಾಗ ಎಲ್ಲರೊಂದಿಗೂ ಇರುವ ಇಂತಹವರು, ಯಾರೋ ಕಷ್ಟ ಎಂದು ಬಂದಾಗ ಮಾತ್ರ ಒಂಟಿತನದೆಡೆಗೆ ಜಾರಿಕೊಳ್ಳುವ, ಈ ಮೂಲಕ ತಾನು ಒಂಟಿ ಬಾಳು ಬಾಳುತ್ತಿದ್ದೇನೆ, ನನಗೆ ಏಕಾಂಗಿಯಾಗಿರುವುದೇ ಇಷ್ಟ ಎಂದು ತೋರಿಸಿಕೊಳ್ಳಲು ಆರಂಭಿಸುತ್ತಾರೆ. ಒಬ್ಬನೇ. ಜೊತೆಗೆ ಯಾರೂ ಇಲ್ಲ. ಯಾರ ಹಂಗೂ ಇಲ್ಲದೆ ನನಗೆ ಹೇಗನ್ನಿಸುತ್ತದೆಯೋ ಹಾಗಿದ್ದು ಬಿಡಬಹುದು. ಇದನ್ನೇ ’ಏಕಾಂಗಿ ಬದುಕು’ ಎನ್ನುವುದಾ? ಇದರ ಇನ್ನೊಂದು ಹೆಸರೇ ಒಂಟಿತನವಾ? ಹೌದು, ಒಂದು ರೀತಿಯಲ್ಲಿ ಇದು ಅದೇ. ಇಡೀ ಲೋಕವೇ ಒಂದೆಡೆಯಾದರೆ, ಅದರಾಚೆಗೆ ಬಂದು ನಾನೊಬ್ಬನೇ ನನಗನ್ನಿಸಿದಂತೆ ನನ್ನದೇ ಲೋಕದಲ್ಲಿ ಬದುಕುವುದು ಒಂಟಿತನ; ಏಕಾಂಗಿ ಬದುಕು. ಈ ಬದುಕಿನಲ್ಲಿ ಎಂತಹದ್ದೇ ಸಂದರ್ಭ ಬಂದರೂ ನನಗೆ ಯಾರೆಂದರೆ ಯಾರೂ ಬೇಡ ಎನ್ನುವಂತಹ ನಿರ್ಧಾರದೊಂದಿಗೇ ಒಂಟಿತನದ ಬದುಕು ಹೆಜ

ಈಗ ಆರು ಪಾಸಾಗಿ ಏಳು...

ಇಮೇಜ್
ಪರೀಕ್ಷೆಗಳೆಲ್ಲ ಮುಗಿದಿರುತ್ತವೆ. ರಿಸಲ್ಟು ಕೊಡುವ ಏಪ್ರಿಲ್ ಹತ್ತನೇ ತಾರೀಖಿಗೆ ಇನ್ನೂ ಹತ್ತು ಹದಿನೈದು ದಿನವಿರುತ್ತದೆ. ಈ ಗ್ಯಾಪಿನಲ್ಲಿ ಟೀಚರ‍್ರುಗಳಿಗೆ ಶಾಲೆಯಲ್ಲಿ ಉತ್ತರ ಪತ್ರಿಕೆ ನೋಡುವ ಕೆಲಸವಿರುತ್ತದೆ, ಆದ್ದರಿಂದ ಅಧಿಕೃತವಾಗಿ ರಜೆ ಘೋಷಣೆ ಆಗದೇ ಇದ್ದರೂ ಶಾಲೆಗಳಿಗೆ ರಜೆ... ಈ ಸಮಯದಲ್ಲಿ ಯಾರಾದರೂ ಮಾತಿಗೆ ಸಿಕ್ಕು, ‘ನೀನು ಎಷ್ಟನೇ ಕ್ಲಾಸು?’ ಎಂದು ಕೇಳಿದರೆ, ರಿಸಲ್ಟ್ ಬಾರದೇ ಇದ್ದರೂ ಐದನೇ ಕ್ಲಾಸು ಪಾಸೇ ಆಗಿಬಿಟ್ಟಿದ್ದೇವೆ ಎನ್ನುವ ಭರ್ತಿ ಆತ್ಮವಿಶ್ವಾಸದಿಂದ ‘ಆರನೇ ಕ್ಲಾಸು’ ಎಂದು ಬಿಡುತ್ತೇವೆ. ಕೇಳಿದವರಿಗೆ ಏಪ್ರಿಲ್ ಹತ್ತಕ್ಕೆ ರಿಸಲ್ಟ್ ಎನ್ನುವುದು ಗೊತ್ತಿಲ್ಲದಿದ್ದರೂ, ಗೊತ್ತಿದ್ದೂ ನೆನಪಿಲ್ಲದೇ ಹೋದರೂ ಅದು ಸಹಜವಾಗಿಯೇ ಆ ಸಮಯದಲ್ಲಿ ಇಂತಹ ಪ್ರಶ್ನೆ ಕೇಳುವ ಎಲ್ಲರಲ್ಲೂ ಹುಟ್ಟುವ ಅನುಮಾನವೇನೋ ಎನ್ನುವಂತೆ, ‘ಐದನೇ ಕ್ಲಾಸು ಪಾಸಾಗಿ ಆರಾ? ಅಥವಾ ಆರು ಪಾಸಾಗಿ ಏಳಾ?’ ಎಂದು ಅವರು ಕೇಳುವುದು, ನಾವು ಮತ್ತೆ ಸಮಜಾಯಿಷಿ ಕೊಡುವುದು... ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗಿ ಹತ್ತು ಹದಿನೈದು ದಿನ ಕಳೆಯುವವರೆಗೂ ಇದು ನಮ್ಮೆಲ್ಲರ ಬದುಕಿನ ಪುಟಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಪ್ರತೀ ವರ್ಷದ ಮಾರ್ಚ್-ಏಪ್ರಿಲ್ ತಿಂಗಳ ನೆನಪುಗಳು. ಇದೊಂದು ರೀತಿಯ ಗೊಂದಲದ ಪಿರಿಯಡ್ಡು. ಪರೀಕ್ಷೆ ಬರೆದ ನಮಗೂ ಗೊಂದಲವೇ. ಎಷ್ಟನೇ ಕ್ಲಾಸು ಎಂದು ಪ್ರಶ್ನಿಸುವವರಿಗೂ ಗೊಂದಲ ಮತ್ತು ಅನುಮಾನ. ಆಗ ಈಗಿನ ರೀತಿ ಸಣ್ಣ ಕ್ಲಾಸಿನ ಮಕ್ಕಳೆಲ್ಲರನ್ನೂ