ಪೋಸ್ಟ್‌ಗಳು

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಇಮೇಜ್
ಆಗ ನಾನು ಅರೆಕಾಲಿಕ ಸಿನಿಮಾ ಪತ್ರಕರ್ತನಾಗಿದ್ದೆ. ಆಗಾಗ ಸಿನಿಮಾದವರನ್ನು ಭೇಟಿಯಾಗುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ದರ್ಶನ್ ಭೇಟಿಯಾಗುವ ಅವಕಾಶ ಸಿಕ್ಕಿತು. ನಾನು ಶೂಟಿಂಗಿನಲ್ಲಿದ್ದೇನೆ, ಶೂಟಿಂಗ್ ಸ್ಪಾಟಿಗೇ ಬನ್ನಿ. ಇಲ್ಲೇ ಮಾತನಾಡೋಣ ಎಂದರು. ಮಲ್ಲೇಶ್ವರ ಸಮೀಪದ ಗ್ರೌಂಡೊಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಯಾವ ಸಿನಿಮಾ ಎಂದು ನೆನಪಿಲ್ಲ. ಆ ಸಿನಿಮಾದಲ್ಲಿ ಮಾನ್ಯ ಹೀರೋಯಿನ್‌. ದರ್ಶನ್‌ ಬ್ರೇಕ್‌ನಲ್ಲಿ ನಮ್ಮ ಜೊತೆ ಮಾತನಾಡಿದರು. ಹೇಗೂ ಬರೋದು ಬಂದಿದ್ದೇವಲ್ಲ, ಸಿಕ್ಕರೆ ಮಾನ್ಯಳ ಜೊತೆಗೂ ಮಾತನಾಡಿ ಒಂದು ಲೇಖನ ಬರೆಯಬಹುದು ಎಂದುಕೊಂಡು, ದರ್ಶನ್ ಬಳಿ, ’ಸ್ವಲ್ಪ ಮಾನ್ಯಳನ್ನು ಇಂಟ್ರಡ್ಯೂಸ್‌ ಮಾಡಿಕೊಡ್ತೀರಾ?’ ಎಂದು ಕೇಳಿದೆವು. ಆಕೆ ಬ್ರೇಕ್‌ನಲ್ಲಿ ತನ್ನ ಕ್ಯಾರಾವಾನ್‌ನಲ್ಲಿ ರೆಸ್ಟ್‌ ಮಾಡುತ್ತಿದ್ದಳು. ದರ್ಶನ್‌ ಕೂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಆ ಕ್ಯಾರಾವಾನ್‌ ನಿಂತಿತ್ತು. ದರ್ಶನ್‌ ಆಯಿತು, ಪರಿಚಯಿಸಿಕೊಡುತ್ತೇನೆ. ಮಾತನಾಡಿ ಎಂದು ಹೇಳಬಹುದಿತ್ತು. ಅದು ಅವರಿಂದ ಆಗದೇ ಇರುವ ಕೆಲಸವೇನೂ ಆಗಿರಲಿಲ್ಲ. ಆದರೆ ದರ್ಶನ್‌ ಹಾಗೆ ಮಾಡಲಿಲ್ಲ. ಬದಲಿಗೆ, ’ಸಿನಿಮಾಕ್ಕೆಷ್ಟು ಬೇಕೋ ಅಷ್ಟು ಮಾತ್ರ ನಾನು ನನ್ನ ಸಹನಟಿಯರ ಜೊತೆ ಮಾತನಾಡೋದು. ಅದರಾಚೆಗೆ ನಾನು ಅವರ ಜೊತೆ ಕಾಂಟ್ಯಾಕ್ಟಿನಲ್ಲಿ ಇರೋದಿಲ್ಲ. ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳೋರು. ಊಟದ ತಟ್ಟೆ ಮುಂದೆ, ಹುಡುಗಿಯರ ಮುಂದೆ ಹೆಚ್ಚು ಹೊತ್ತು ಕೂರಬಾರದು ಅಂತ. ಅದನ್ನ

ಬೆಳಕಾದಳೇ ಅವಳು...?!

ಇಮೇಜ್
ಅದು ಎಂದಿನ ಸಂಜೆಯಾಗಿರಲಿಲ್ಲ. ನನಗದು ಅಂದಾಜೂ ಇರಲಿಲ್ಲ. ಎಂದಿನಂತೆಯೇ ಅವಳನ್ನು ಭೇಟಿಯಾಗಲು ನಾನು ದೇವಸ್ಥಾನದ ಎದುರಿರುವ ಬನ್ನಿಮರದ ಕಟ್ಟೆಯ ಮೇಲೆ ಕುಳಿತು ಕಾಯುತ್ತಿದ್ದೆ. ಆ ದೇವಸ್ಥಾನದಲ್ಲಿ ಬೆಳಗಿನ ಪೂಜೆ ಮಾತ್ರ. ಬೆಳಿಗ್ಗೆ ಹತ್ತು ಗಂಟೆಗೆ ಪುರೋಹಿತರು ದೇವಸ್ಥಾನದ ಬಾಗಿಲು ಮುಚ್ಚಿ ಹೋದರೆ ಮತ್ತೆ ಬರುವುದು ಮಾರನೇಯ ದಿನ ಬೆಳಿಗ್ಗೆ ಆರು ಗಂಟೆಗೆ. ಅಷ್ಟು ಹೊತ್ತೂ ದೇವಸ್ಥಾನದ ಸುತ್ತೆಲ್ಲ ದೇವರೂ ಇಲ್ಲದ ಏಕಾಂತ. ಆದ್ದರಿಂದಲೇ ನಮ್ಮಿಬ್ಬರ ಭೇಟಿಗೆ ಅದು ಸರಿಯಾದ ಜಾಗವಾಗಿತ್ತು. ಅವಳು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ದಾರಿಯಿಂದ ಕೆರೆಯತ್ತ ಹೋಗುವ ದಾರಿಗೆ ಎಡಕ್ಕೆ ತಿರುಗಿಕೊಂಡು ಎರಡು ನಿಮಿಷ ನಡೆದರೆ ಈ ದೇವಸ್ಥಾನದ ಎದುರಿರುವ ಬನ್ನಿಮರದ ಕಟ್ಟೆ ಸಿಕ್ಕುತ್ತಿತ್ತು. ನಮ್ಮಿಬ್ಬರ ಮೊದಲ ಭೇಟಿ ಆಗಿದ್ದೂ ಇಲ್ಲೇ. ಒಂದು ಸೋಮವಾರ ದೇವಸ್ಥಾನದ ದೇವರ ದರ್ಶನಕ್ಕೆಂದು ಬಂದವನಿಗೆ ಅವಳ ದರ್ಶನವಾಗಿತ್ತು. ಮೊದಲ ದರ್ಶನದಲ್ಲೇ ವರವೊಂದು ಸಿಕ್ಕ ಸೂಚನೆ... ಮೊದಲು ನಗು, ಆನಂತರ ಒಂದಷ್ಟು ದೀರ್ಘವಾದ ಮೌನ, ಮೌನವಿನ್ನು ಹತ್ತಿರ ಸುಳಿಯುವುದಿಲ್ಲ ಎನ್ನುವಂತೆ ಮಾತಿನ ಗೆಜ್ಜೆಗಳ ಸಣ್ಣ ಸಪ್ಪಳ, ಆನಂತರ ಕೊನೆಯೇ ಇಲ್ಲವೆನ್ನುವಂತೆ ಆರಂಭವಾದ ಘಲ್‌ಘಲ್‌...  ಅಂದಹಾಗೇ, ಹೇಳಲು ಮರೆತಿದ್ದೆ. ಅವಳು ನೃತ್ಯ ಶಿಕ್ಷಕಿ. ಪಕ್ಕದ ಪಟ್ಟಣದಲ್ಲಿರುವ ನೃತ್ಯ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ’ನೀವು?’ ನಾವಿಬ್ಬರೇ ಇದ್ದ ಏಕಾಂತದಲ್ಲ

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಇಮೇಜ್
ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ ನಿನ್ನನ್ನು ನಂಬಿಕೊಂಡವರಿಗೆ, ಪ್ರೀತಿಸಿಕೊಳ್ಳುತ್ತಿರುವವರಿಗೆ ಕಷ್ಟವಾಗುವುದಿಲ್ಲವಾ, ನೀನಿಲ್ಲದೇ ಅವರು ಹೇಗೆ ಬದುಕುತ್ತಾರೆ ಎನ್ನುವ ಯಾವ ಪ್ರಶ್ನೆಗಳನ್ನೂ ಸಾವು ಕೇಳುವುದಿಲ್ಲ. ಅದು ನಿನ್ನ ಕಣ್ಣೀರು, ಇದೊಂದು ಸಾರಿ ಬಿಟ್ಟು ಬಿಡು ಎಂದು ದಯನೀಯವಾಗಿ ಮುಗಿದ ಕೈ... ಯಾವುದನ್ನೂ ನೋಡುವುದಿಲ್ಲ. ಬರಬೇಕೆಂದರೆ ನೀನು ಬರಬೇಕಷ್ಟೇ ಎಂದು ಎಳೆದುಕೊಂಡು ಹೋಗಿ ಬಿಡುತ್ತದೆ. ಹಾಗಿಲ್ಲದೇ ಹೋಗಿದ್ದರೆ ಖುಷ್ಕುಷಿಯಾಗಿ ಜಲಪಾತದೆದುರು ನಿಂತುಕೊಂಡು ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ ಅದ್ಯಾಕೆ ಹಾಗೆ ಬಿದ್ದು ಸಾವಿನೊಂದಿಗೆ ಹೋಗಿ ಬಿಡುತ್ತಿದ್ದ ಹೇಳಿ?! ಆತ ಸಾಯುವುದಕ್ಕೆಂದು ಅಲ್ಲಿ ಹೋಗಿರಲಿಲ್ಲ. ಒಂದೊಮ್ಮೆ ಹಾಗೆ ಹೋಗಿದ್ದರೂ ಆತ ಇಷ್ಟು ಚೆಂದದ ವಿಡಿಯೋ ಮಾಡಿಸಿಕೊಳ್ಳುತ್ತಿರಲಿಲ್ಲ. ಬದುಕಬೇಕು, ಬದುಕಿಗೆ ಇನ್ನಷ್ಟು ಬಣ್ಣ ತುಂಬಿಕೊಳ್ಳಬೇಕು ಎನ್ನುವ ಕನಸುಗಳೊಂದಿಗೇ ಭದ್ರಾವತಿಯ ಶರತ್‌ ಜಲಪಾತದೆದುರು ಇರುವ ಬಂಡೆಗಲ್ಲಿನ ಮೇಲೆ ನಿಂತಿದ್ದಾನೆ. ಹೀಗೆ ನಿಂತವನೆದುರಿಗೇ ’ಸಾವು’ ತನ್ನ ಅಪ್ಪುಗೆಗೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು ಎಂದು ಶರತ್‌ಗಾಗಲೀ, ಶರತ್‌ ವಿಡಿಯೋ ಮಾಡುತ್ತಿದ್ದ ಜೊತೆಗಿದ್ದ ಸ್ನೇಹಿತನಿಗಾಗಲೀ ಕಾಣಿಸಿರಲಿಲ್ಲ... ಕಾಣಿಸುವುದು ಸಾಧ್ಯವೂ ಇಲ್ಲ.

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಇಮೇಜ್
ಕೆಲವರನ್ನು ಗಮನಿಸಿ ನೋಡಿ. ಅವರ ಒಂಟಿತನ ಎನ್ನುವುದು ಜವಾಬ್ದಾರಿಗಳಿಂದ ದೂರ ಉಳಿಯಲಿಕ್ಕೆಂದು ಅವರೇ ಸೃಷ್ಟಿಸಿಕೊಂಡ ಒಂದು ಗುರಾಣಿಯಂತೆ ಕಾಣಿಸುತ್ತಿರುತ್ತದೆ! ಅವರ ಬದುಕು ಅವರ ಇಷ್ಟ ಎನ್ನುವುದೇನೋ ಸರಿ. ಹಾಗೆಂದು ನೀನು ನಿಭಾಯಿಸಲೇಬೇಕಾದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಾಗ ಮಾತ್ರ ನಿನ್ನಲ್ಲಿ ’ಒಂಟಿತನ’ದ ಬದುಕು ಎಚ್ಚರಗೊಳ್ಳುವುದೇಕೆ? ನನಗೆ ಯಾರೂ ಬೇಡ, ನಾನು ನನ್ನಷ್ಟಕ್ಕೆ ಬದುಕುತ್ತಿದ್ದೇನೆ ಎನ್ನುವಂತಹ ಮಾತುಗಳು ಯಾರೋ ನಿನ್ನ ಬಳಿ ಕಷ್ಟ ಹೇಳಿಕೊಂಡು ಬಂದಾಗ ಮಾತ್ರ ನೆನಪಾಗುವುದೇಕೆ?! ಅಂದರೆ ಸುಖ ಇದೆ, ನೆಮ್ಮದಿ ಇದೆ ಎನ್ನುವಾಗ ಎಲ್ಲರೊಂದಿಗೂ ಇರುವ ಇಂತಹವರು, ಯಾರೋ ಕಷ್ಟ ಎಂದು ಬಂದಾಗ ಮಾತ್ರ ಒಂಟಿತನದೆಡೆಗೆ ಜಾರಿಕೊಳ್ಳುವ, ಈ ಮೂಲಕ ತಾನು ಒಂಟಿ ಬಾಳು ಬಾಳುತ್ತಿದ್ದೇನೆ, ನನಗೆ ಏಕಾಂಗಿಯಾಗಿರುವುದೇ ಇಷ್ಟ ಎಂದು ತೋರಿಸಿಕೊಳ್ಳಲು ಆರಂಭಿಸುತ್ತಾರೆ. ಒಬ್ಬನೇ. ಜೊತೆಗೆ ಯಾರೂ ಇಲ್ಲ. ಯಾರ ಹಂಗೂ ಇಲ್ಲದೆ ನನಗೆ ಹೇಗನ್ನಿಸುತ್ತದೆಯೋ ಹಾಗಿದ್ದು ಬಿಡಬಹುದು. ಇದನ್ನೇ ’ಏಕಾಂಗಿ ಬದುಕು’ ಎನ್ನುವುದಾ? ಇದರ ಇನ್ನೊಂದು ಹೆಸರೇ ಒಂಟಿತನವಾ? ಹೌದು, ಒಂದು ರೀತಿಯಲ್ಲಿ ಇದು ಅದೇ. ಇಡೀ ಲೋಕವೇ ಒಂದೆಡೆಯಾದರೆ, ಅದರಾಚೆಗೆ ಬಂದು ನಾನೊಬ್ಬನೇ ನನಗನ್ನಿಸಿದಂತೆ ನನ್ನದೇ ಲೋಕದಲ್ಲಿ ಬದುಕುವುದು ಒಂಟಿತನ; ಏಕಾಂಗಿ ಬದುಕು. ಈ ಬದುಕಿನಲ್ಲಿ ಎಂತಹದ್ದೇ ಸಂದರ್ಭ ಬಂದರೂ ನನಗೆ ಯಾರೆಂದರೆ ಯಾರೂ ಬೇಡ ಎನ್ನುವಂತಹ ನಿರ್ಧಾರದೊಂದಿಗೇ ಒಂಟಿತನದ ಬದುಕು ಹೆಜ

ಈಗ ಆರು ಪಾಸಾಗಿ ಏಳು...

ಇಮೇಜ್
ಪರೀಕ್ಷೆಗಳೆಲ್ಲ ಮುಗಿದಿರುತ್ತವೆ. ರಿಸಲ್ಟು ಕೊಡುವ ಏಪ್ರಿಲ್ ಹತ್ತನೇ ತಾರೀಖಿಗೆ ಇನ್ನೂ ಹತ್ತು ಹದಿನೈದು ದಿನವಿರುತ್ತದೆ. ಈ ಗ್ಯಾಪಿನಲ್ಲಿ ಟೀಚರ‍್ರುಗಳಿಗೆ ಶಾಲೆಯಲ್ಲಿ ಉತ್ತರ ಪತ್ರಿಕೆ ನೋಡುವ ಕೆಲಸವಿರುತ್ತದೆ, ಆದ್ದರಿಂದ ಅಧಿಕೃತವಾಗಿ ರಜೆ ಘೋಷಣೆ ಆಗದೇ ಇದ್ದರೂ ಶಾಲೆಗಳಿಗೆ ರಜೆ... ಈ ಸಮಯದಲ್ಲಿ ಯಾರಾದರೂ ಮಾತಿಗೆ ಸಿಕ್ಕು, ‘ನೀನು ಎಷ್ಟನೇ ಕ್ಲಾಸು?’ ಎಂದು ಕೇಳಿದರೆ, ರಿಸಲ್ಟ್ ಬಾರದೇ ಇದ್ದರೂ ಐದನೇ ಕ್ಲಾಸು ಪಾಸೇ ಆಗಿಬಿಟ್ಟಿದ್ದೇವೆ ಎನ್ನುವ ಭರ್ತಿ ಆತ್ಮವಿಶ್ವಾಸದಿಂದ ‘ಆರನೇ ಕ್ಲಾಸು’ ಎಂದು ಬಿಡುತ್ತೇವೆ. ಕೇಳಿದವರಿಗೆ ಏಪ್ರಿಲ್ ಹತ್ತಕ್ಕೆ ರಿಸಲ್ಟ್ ಎನ್ನುವುದು ಗೊತ್ತಿಲ್ಲದಿದ್ದರೂ, ಗೊತ್ತಿದ್ದೂ ನೆನಪಿಲ್ಲದೇ ಹೋದರೂ ಅದು ಸಹಜವಾಗಿಯೇ ಆ ಸಮಯದಲ್ಲಿ ಇಂತಹ ಪ್ರಶ್ನೆ ಕೇಳುವ ಎಲ್ಲರಲ್ಲೂ ಹುಟ್ಟುವ ಅನುಮಾನವೇನೋ ಎನ್ನುವಂತೆ, ‘ಐದನೇ ಕ್ಲಾಸು ಪಾಸಾಗಿ ಆರಾ? ಅಥವಾ ಆರು ಪಾಸಾಗಿ ಏಳಾ?’ ಎಂದು ಅವರು ಕೇಳುವುದು, ನಾವು ಮತ್ತೆ ಸಮಜಾಯಿಷಿ ಕೊಡುವುದು... ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗಿ ಹತ್ತು ಹದಿನೈದು ದಿನ ಕಳೆಯುವವರೆಗೂ ಇದು ನಮ್ಮೆಲ್ಲರ ಬದುಕಿನ ಪುಟಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಪ್ರತೀ ವರ್ಷದ ಮಾರ್ಚ್-ಏಪ್ರಿಲ್ ತಿಂಗಳ ನೆನಪುಗಳು. ಇದೊಂದು ರೀತಿಯ ಗೊಂದಲದ ಪಿರಿಯಡ್ಡು. ಪರೀಕ್ಷೆ ಬರೆದ ನಮಗೂ ಗೊಂದಲವೇ. ಎಷ್ಟನೇ ಕ್ಲಾಸು ಎಂದು ಪ್ರಶ್ನಿಸುವವರಿಗೂ ಗೊಂದಲ ಮತ್ತು ಅನುಮಾನ. ಆಗ ಈಗಿನ ರೀತಿ ಸಣ್ಣ ಕ್ಲಾಸಿನ ಮಕ್ಕಳೆಲ್ಲರನ್ನೂ

ಬಿಸಿಲು ಮಳೆಯಲ್ಲೇ ಅರಳಿ ಕೊಚ್ಚಿ ಹೋದ ಪ್ರೀತಿಯ ನೆನಪಿನಲ್ಲಿ...

ಇಮೇಜ್
ಅವತ್ತು ಬೆಂದೇ ಹೋಗುವಂತಹ ಬಿಸಿಲು ಇದ್ದಕ್ಕಿದ್ದ ಹಾಗೇ ಮಂಕಾಗಿ ಭರ‍್ರೋ ಎಂದು ಮಳೆ ಸುರಿಯಲಾರಂಭಿಸಿತು. ವರ್ಕ್ ಫ್ರಂ ಹೋಂನಲ್ಲಿದ್ದ ನಾನು ಮನೆಯೊಳಗೆ ಧಗೆ ತಡೆಯಲಾಗದೆ ಹೊರಗೆ ಬಂದು ಜಗುಲಿಯ ಮೇಲೆ ಕುಳಿತು, ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು, ಮಳೆಯ ಪರದೆಯಿಂದಾಚೆ ಕಾಣುತ್ತಿದ್ದ ಮನೆಯ ಕಾಂಪೌಂಡು, ಗೇಟು, ಅದರಾಚೆಗಿನ ರಸ್ತೆಯನ್ನು ನೋಡುತ್ತಿದ್ದಾಗ... ಮಳೆಯ ನಡುವೆ ಕಾಮನಬಿಲ್ಲಿನಂತೆ ಕಾಣಿಸಿಕೊಂಡವಳು ನೀನು! ನನ್ನ ಪಾಲಿಗೆ ನೀನು ಕಾಮನಬಿಲ್ಲೇ... ಯಾವ ಸೂಚನೆಯನ್ನೂ ಕೊಡದೇ ಬಂದ ಮಳೆಯಲ್ಲಿ ಸಿಕ್ಕಿದ್ದ ನೀನು ತಲೆಯ ಮೇಲೆ ಚೂಡೀದಾರದ ವೇಲ್‌ ಹಾಕಿಕೊಂಡು ಅವಸರವಸರವಾಗಿ ನಡೆದು ಹೋಗುತ್ತಿದ್ದೆ. ಆ ಅವಸರದಲ್ಲಿ ನನ್ನೆರಡು ಕಣ್ಣುಗಳು ನಿನ್ನನ್ನೇ ನೋಡುತ್ತಿದೆ ಎಂದು ನಿನಗೆ ತಿಳಿದಿದ್ದಾದರೂ ಹೇಗೆ? ಅದಿವತ್ತಿಗೂ ನನಗೆ ಅಚ್ಚರಿಯೇ... ಹಾಗೆ ನೀನು ನೋಡುತ್ತಿದ್ದರೆ, ನಿನ್ನನ್ನೇ ನೋಡುತ್ತಿದ್ದ ನನಗೂ ಕಣ್ಣು ಕದಲಿಸಲಾಗಲಿಲ್ಲ. ಕಣ್ಣು ಕಣ್ಣುಗಳು ಕಲೆತು, ಅದೆಷ್ಟೋ ವರ್ಷಗಳ ಪರಿಚಯವೇನೋ ಎನ್ನುವಂತೆ ಕಣ್ಣಲ್ಲೇ ಹಾಯ್‌ ಹೇಳಿ, ನಾನು ಕೈ ಸನ್ನೆಯಲ್ಲೇ ಕೊಡೆಯನ್ನು ತೋರಿಸಿ ತರಲಾ ಎಂದು ಅದ್ಯಾವ ಧೈರ್ಯದಿಂದ ಕೇಳಿದೆನೋ... ಬಹುಶಃ ಅವತ್ತು ಹಾಗೆ ಕೇಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ. ಯಾಕೆಂದರೆ ಹಾಗೆ ಕೇಳಿದ ತಪ್ಪಿಗೇ ಇವತ್ತೂ ಅವತ್ತಿನಂತೆಯೇ ಮತ್ತೆ ಬಿಸಿಲ ದಣಿಸಿ ಸುರಿಯುತ್ತಿರುವ ಮಳೆಯಲ್ಲಿ ನಾನೊಬ್ಬನೇ ಹೀಗೆ

ಪರಿಚಿತರಾಗಲು ಬಂದು ಅಪರಿಚಿತರಾಗಿಯೇ ಉಳಿದ ಎಲ್ಲರಿಗೂ...

ಇಮೇಜ್
ಪರಿಚಿತರು ಎಂದರೆ ಯಾರು? ಎದುರು ಸಿಕ್ಕಾಗ ಪರಿಚಯದ ನಗು ಚೆಲ್ಲುವವರು, ನಾ ಹೇಳುವುದನ್ನು ಮನಸ್ಸಿಟ್ಟು ಕೇಳಿಸಿಕೊಳ್ಳುವವರು, ಅವರು ಹೇಳಿದ್ದು ನನ್ನದೆನ್ನಿಸುವಂತೆ ಮಾಡುವವರು, ಕಷ್ಟಗಳಲ್ಲಿ ಜೊತೆಯಾಗುವವರು, ಸಂತಸದಲ್ಲಿ ಒಂದಾಗುವವರು... ಹೀಗೆಲ್ಲ ಆತುಕೊಳ್ಳುವ ಬಂಧಕ್ಕೆ ನಾವು ’ಸ್ನೇಹಿತರು’, ’ಪ್ರೀತಿಯವರು’, ’ನಮ್ಮವರು’ ಎಂದೆಲ್ಲ ಹೆಸರಿಡುತ್ತಾ ಹೋಗುತ್ತೇವೆ. ಹೀಗಿಟ್ಟ ಹೆಸರಿಗೆ ತಕ್ಕ ಹಾಗೇ ಅವರು ನಮ್ಮ ಬದುಕಿನ ಅವರದ್ದೆನ್ನುವ ಕ್ಷಣಗಳಲ್ಲಿ ನಮ್ಮವರಾಗುತ್ತಿರುತ್ತಾರೆ. ಆ ಕಾರಣದಿಂದಲೇ ಅವರ ಮತ್ತು ನಮ್ಮ ನಡುವೆ ’ಅಪರಿಚಿತತೆ’ ಇರುವುದಿಲ್ಲ. ಒಂದೊಮ್ಮೆ ಪರಿಚಿತರೇ ಅಪರಿಚಿತರಂತೆ ಇದ್ದು ಬಿಟ್ಟರೆ?! ನೋಡಿದರೂ ನೋಡದಂತೆ ಹೋಗುವವರು, ಇವನ್ಯಾತರವ ಎಂದು ಬೇಕೆಂದೇ ದೂರದಲ್ಲಿಡುವವರು, ಅಂತಸ್ತು-ಅಧಿಕಾರ ಇದ್ದರಷ್ಟೇ ಮಾತನಾಡುತ್ತೇನೆ, ಇಲ್ಲದೇ ಹೋದರೆ ಮೂಸಿಯೂ ನೋಡುವುದಿಲ್ಲ ಎನ್ನುವವರು... ಅವರವರ ಹುಟ್ಟು, ಬೆಳವಣಿಗೆ ಮತ್ತು ಇದರೊಂದಿಗೆ ಬೆಸೆದುಕೊಳ್ಳುವ ಮನಸ್ಥಿತಿಯಿಂದಾಗಿ ಅಪರಿಚಿತರು ಅನ್ನಿಸಿಬಿಡುವವರಿಂದ ಹೆಚ್ಚಿನ ಬಾರಿ ದೂರವೇ ಉಳಿದುಬಿಡುವುದು, ನನ್ನ ಲೋಕದಲ್ಲಿ ನಾನಿರುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ. ಅಂದಹಾಗೇ, ನನಗೆ ಯಾರನ್ನೂ ದೂರವಿಟ್ಟು ಅಭ್ಯಾಸವಿಲ್ಲ. ಅವರಾಗಿ ದೂರ ಹೋದಾಗ ತೀರಾ ’ನಮ್ಮವರು’ ಎಂದುಕೊಂಡು ಬೆನ್ನು ಬಿದ್ದು ಹೋಗುವ ಜಾಯಮಾನ ನನ್ನದಲ್ಲ. ಅವರೆಲ್ಲಿದ್ದಾರೋ ಅಲ್ಲಿಯೇ ಆರಾಮಾಗಿರಲಿ ಎಂದು ಮನಸ್ಸಿನಲ್ಲಿ ಹೇಳ

ಶಾಮಣ್ಣನ ಗೂಡಂಗಡಿಯಲ್ಲಿ ತತ್ವ ಸಿದ್ಧಾಂತಗಳ ಮಾರಾಟವೂ...

ಇಮೇಜ್
ಅವು ಹೊಸನಗರದ ಕಾಲೇಜಿನ ದಿನಗಳು. ಆಗ ನನಗೊಂದಿಷ್ಟು ಓದುವ, ಬರೆಯುವ ಹುಚ್ಚಿತ್ತು. ಆದರೆ ನನ್ನೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ಬಹುತೇಕರು ಕ್ಲಾಸಿನ ಪುಸ್ತಕವನ್ನೇ ಓದುವುದು ಕಷ್ಟ, ಇನ್ನು ಇದರಾಚೆಗೆ ಹೋಗಿ ಏನು ಓದುವುದು ಎನ್ನುವ ಮನಸ್ಥಿತಿಯವರಾಗಿದ್ದರಿಂದ, ನನ್ನ ಯೋಚನೆ, ಅಭಿರುಚಿಗೆ ಹೊಂದಿಕೊಳ್ಳುವ ಸ್ನೇಹಿತರು ಸಿಕ್ಕಿರಲಿಲ್ಲ. ನನಗೂ ಕಾಲೇಜಿನಲ್ಲಿ ಹೆಚ್ಚು ಸಮಯ ಕಳೆಯುವುದು ಇಷ್ಟವಾಗುತ್ತಿರಲಿಲ್ಲ. ಹೀಗಿದ್ದಾಗಲೇ ನನಗೆ ಆಗ ನಡೆಯುತ್ತಿದ್ದ ‘ಸಾಹಿತ್ಯಾಧ್ಯಯನ ಶಿಬಿರ’ವೊಂದರಲ್ಲಿ ಪರಿಚಯವಾಗಿದ್ದು ಹೊಸನಗರದ ಶಾಮಣ್ಣ. ಹೊಸನಗರದಲ್ಲಿ ಸಣ್ಣದೊಂದು ‘ಗೂಡಂಗಡಿ’ ನಡೆಸುತ್ತಿದ್ದ ಶಾಮಣ್ಣ ಮನೆಯ ಪರಿಸ್ಥಿತಿ ಕಾರಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಓದನ್ನು ನಿಲ್ಲಿಸಿ ವ್ಯವಹಾರಕ್ಕಿಳಿದಿದ್ದರು. ಆದರೆ ಅವರಿಗೊಂದಿಷ್ಟು ಸಾಹಿತ್ಯದೆಡೆಗೆ ಆಸಕ್ತಿ ಇದ್ದಿದ್ದರಿಂದ, ಅಂಗಡಿಗೆ ರಜೆ ಇದ್ದ ದಿನದಲ್ಲಿ ಅಥವಾ ಅಂಗಡಿಗೆ ಸಾಮಾನು ಕೊಳ್ಳಲು ಶಿವಮೊಗ್ಗಕ್ಕೆ ಹೋಗುವುದಿದ್ದಾಗ ಅಲ್ಲಿ ಯಾವುದಾದರೂ ಸಾಹಿತ್ಯ ಸಂಬಂಧಿ ಕಾರ್ಯಕ್ರಮವಿದ್ದರೆ ಅದಕ್ಕೆ ಅಟೆಂಡ್ ಆಗುವ ರೂಢಿ ಮಾಡಿಕೊಂಡಿದ್ದರು. ಹಾಗೆ ಅವತ್ತು ಅವರು ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಾಹಿತ್ಯಾಧ್ಯಯನ ಶಿಬಿರವೊಂದಕ್ಕೆ ಬಂದವರು, ಆ ಶಿಬಿರಕ್ಕೆ ನನ್ನ ಹಾಗೇ ಬಂದಿದ್ದ ಲೇಖಕರೊಬ್ಬರ ಜೊತೆ ನಾನು ಮಾತನಾಡುತ್ತಿದ್ದಾಗ ನಾನು ‘ಕೋಡೂರಿನವನು’ ಎನ್ನುವುದು ಗೊತ್ತಾಗಿ, ಅವರಾಗಿಯೇ ನನ್ನ ಪರಿಚಯ ಮಾಡಿಕೊಂಡರು.

ಅವರು ಹೆಸರಿಗೆ ತಕ್ಕ ಹಾಗೆ ’ಸುವರ್ಣ’ ಮೇಡಂ

ಇಮೇಜ್
‘ಸರಳತೆ ಹಾಗೂ ಸೌಮ್ಯ ಸ್ವಭಾವವೇ ಕೆಲವರಿಗೆ ಕೆಲವೊಮ್ಮೆ ಶಾಪವಾಗಿ ಬಿಡುತ್ತದೆ’. ನಾನು ಹುಟ್ಟಿ ಬೆಳೆದ ಕೋಡೂರು ಗ್ರಾಮದ ಯಳಗಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಸುವರ್ಣ ಮೇಡಂ ಅವರ ಪರಿಚಯವಾಗಿ, ನಮ್ಮ ‘ಆರುಡೋ’ ಸಂಸ್ಥೆಯ ಕೆಲಸಗಳೇ ಕಾರಣ ವಾಗಿ ಅವರೊಂದಿಗೆ ಒಡನಾಟ ಇಟ್ಟುಕೊಂಡ ನಂತರ ಆಗಾಗ ಅವರನ್ನು ಭೇಟಿಯಾದಾಗ, ಅವರ ನೆನಪಾದಾಗ ಮತ್ತು ಅವರು ಕರೆ ಮಾಡಿ ನನ್ನೊಂದಿಗೆ ಮಾತನಾಡಿ ಮುಗಿಸಿದ ನಂತರ ಈ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು. ಯಾಕೆಂದರೆ, ಒಂದು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರೂ ಅವರು ಮೈಗೂಡಿಸಿಕೊಂಡಿದ್ದ ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿತ್ವವೇ ಅವರಿಗೊಂದು ಶಾಪವಾಗಿತ್ತು.  ನಾನು ಹತ್ತಾರು ಶಿಕ್ಷಕರನ್ನು, ಮುಖ್ಯ ಶಿಕ್ಷಕರನ್ನು ನೋಡಿದ್ದೇನೆ; ಅವರೊಂದಿಗೆ ಒಡನಾಡಿದ್ದೇನೆ. ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಹುದ್ದೆಗೆ ತಕ್ಕಂತೆ ಅವರಲ್ಲೊಂದು ಅಹಂ ಬೆಳೆದುಬಿಡುತ್ತದೆ. ತಮ್ಮ ಸುತ್ತಲೂ ಆ ಅಹಂನ ಕೋಟೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳುತ್ತಾರೆ. ಟೀಚರ್ರು ಅಥವಾ ಹೆಡ್ ಮೇಷ್ಟ್ರು ಎಂದರೆ ಹೀಗೇ ಇರಬೇಕು ಎನ್ನುವ ಅದೆಂತಹದ್ದೋ ಭ್ರಮೆಯಲ್ಲೇ ತೇಲುತ್ತಾ ಅವರ ವ್ಯಕ್ತಿತ್ವಕ್ಕೊಂದು ವ್ಯವಹಾರಿಕ ಗುಣವನ್ನೂ ಅಂಟಿಸಿಕೊಂಡೂ ಬಿಡುತ್ತಾರೆ. ಆದ್ದರಿಂದಲೇ ಅವರು ಶಾಲೆಯ ಆವರಣದಲ್ಲಿರಲಿ, ಅದರಿಂದ ಹೊರಗಿರಲಿ, ಊರಿನ ರಾಜಕಾರಣಿಗಳೊಂದಿಗೆ ಒಂದು ರೀತಿ ಬೆರೆತರೆ, ಇತರೆ ಗ್ರಾಮಸ್ಥ

ಒಂದು ಜೀವದ ಬೆಲೆ ಎಷ್ಟು?!

ಇಮೇಜ್
‘ಪ್ರೀತಿಯ ಅಪ್ಪ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿದೆ ನೀವು ನನ್ನ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದೀರಿ. ಆದರೆ ನಾನು ಮಾಡದ ತಪ್ಪಿಗೆ ನನ್ನನ್ನು ತಪ್ಪಿತಸ್ಥನೆಂದು ನನ್ನ ಮೇಲೆ ಕೇಸ್ ದಾಖಲು ಮಾಡಿ ಎಫ್‌ಐಆರ್ ಹಾಕಿದ್ದಾರೆ. ಅಪ್ಪ ನಾನು ತಪ್ಪು ಮಾಡಿಲ್ಲ ಎಂದರೆ ನೀವು ನಂಬೋದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ, ನಿಜವಾಗಿಯೂ ನಾನು ಹೊಡೆದಿಲ್ಲ. ಜೀವನದ ಮುಂದಿನ ಹಾದಿಯ ಬಗ್ಗೆ ಬಹಳ ಯೋಚಿಸುವ ನಾನು ಈಗ ಎಫ್‌ಐಆರ್ ಎಂಬ ದೊಡ್ಡ ಕಪ್ಪುಚುಕ್ಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಲ್ಲದೆ ನಿಮಗೆ ಇರುವ ಒಳ್ಳೆಯ ಅಭಿಪ್ರಾಯವನ್ನು ನಾನು ಹಾಳು ಮಾಡುತ್ತಿದ್ದೇನೆ ಎನ್ನುವ ಅನಿಸಿಕೆ ನನ್ನದು. ನಿಮ್ಮಂತ ತಂದೆ ಯಾವ ಮಕ್ಕಳಿಗೂ ಸಿಗಲ್ಲ. ನನ್ನ 21 ವರ್ಷದಲ್ಲಿ ನನಗೆ ಬೇಕೆಂದಿದ್ದು ಕೊಡಿಸಿದ್ದೀರಿ. ಕಷ್ಟಪಟ್ಟು ಸಾಕಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ನಾನು ಇಲ್ಲ ಎಂದು ಈ ಎಫ್‌ಐಆರ್ ಹಾಕಿದ ಮೇಲೆ ಗೊತ್ತಾಯ್ತು. ಅಪ್ಪ ನಾನು ಚೆನ್ನಾಗಿ ಓದುತ್ತಿದ್ದು, ಒಳ್ಳೆಯ ಕೆಲ್ಸಕ್ಕೆ ಸೇರುತ್ತಿದ್ದೆ. ನಿಮ್ಮನ್ನು ಚೆನ್ನಾಗಿ ನೋಡ್ಕೋತಿದ್ದೆ. ಆದರೆ, ಈ ಎಫ್‌ಐಆರ್ ಹಾಕಿದ ಮೇಲೆ ಯಾವ ಕೆಲಸ ಸಿಗಲ್ಲ. ಅಪ್ಪ ನನ್ನನ್ನು ಕ್ಷಮಿಸಿಬಿಡಿ, ಆದರೆ, ಅಪ್ಪ ನಾನು ತಪ್ಪು ಮಾಡಿ ಸಾಯುತ್ತಿಲ್ಲ. ನಾನು ತಪ್ಪು ಮಾಡಿದ್ದರೆ, ಇವತ್ತು ಈ ನಿರ್ಧಾರಕ್ಕೆ ಬರುತ್ತಿರಲಿಲ್ಲ. ನಾನು ಮಾಡದ ತಪ್ಪಿಗೆ ನನ್ನನ್ನು ಹೊಣೆ ಮಾಡಿದ್ದಾರೆ. ಆದ್ದರಿಂದ ನನಗೆ ಮುಖ ತೋರಿ ಸಲು ಆಗುತ್ತ